 |
ಮುಖಪುಟ » ಹಬ್ಬ-ಹರಿದಿನ » ಗೌರಿ-ಗಣೇಶ


ನಾಟಕ ರಚನೆ : ಆಕಾಶ ದೀಕ್ಷಿತ, ನೀಲ್ ಕೊಟ್ರಪ್ಪ, ವಿನಯ ಹೊಸಕೆರೆ, ವಿವಹ್ನಿ ಶಾಸ್ತ್ರಿ, ಶಯನ್ ಚಲನ್, ಶಿಲ್ಪಾ ಜಗನ್ನಾಥ್
ಪಾತ್ರವರ್ಗ ಮತ್ತು ಮೊದಲ ಪ್ರದರ್ಶನದ ಪಾತ್ರಧಾರಿಗಳು :
ಮಾರ(ಕಿರಿಯ) : ಕೊಳದ ಕಾವಲುಗಾರ : ವಿವಹ್ನಿ ಶಾಸ್ತ್ರಿ ಮಾರ(ಹಿರಿಯ) : ಕೊಳದ ಕಾವಲುಗಾರ : ಆಕಾಶ ದೀಕ್ಷಿತ ಗಂಗ : ಮಾರನ ಮಗಳು : ರೋಹಿಣಿ ಕೊಪ್ಪರಮ್ ಮಗು : ಗಂಗಾಳ ಮಗ : ವಿನಯ ಸುಜಿತ್ ಭೀಮ : ಬಲಶಾಲಿ ಕೆಲಸಗಾರ : ನಿಹಾಲ್ ನಿರಂದ ಗೌಡ : ಊರ ಗೌಡ : ಧೀಮಂತ ಮಂಜುನಾಥ ರಾಜ : ಪ್ರಜಾಪಾಲಕ ಅರಸ : ನೀಲ ಕೊಟ್ರಪ್ಪ ದೇವಿ : ವೇದ ನದಿಯ ದೇವತೆ : ಶಿಲ್ಪಾ ಜಗನ್ನಾಥ್ ಕೆಲಸಗಾರರು : ಗೌಡನ ಸಹಾಯಕರು : ಚಿರಾಗ ದೀಕ್ಷಿತ, ಆನೀಶ ನಿರಂದ, ಸಾತ್ವಿಕ ಲಕ್ಶ್ಮಣ, ಆಂಕುಶ ರಾವ್ ಸೂತ್ರಧಾರಿಣಿ : ಶಯನ್ ಚಲನ್
ದೃಶ್ಯ 1
ಗಂಗ : ಮಗು ಬಾ ಇಲ್ಲೆ.
ಮಗು : ಬಂದೆ ಅಮ್ಮ.
ಗಂಗ : ಎಲ್ಲಿ ಇದ್ದೀ ಮಗು.
ಮಗು : ನಾನು ಹಕ್ಕಿಗಳನ್ನು ನೋಡ್ತಿದ್ದೆ
ಗಂಗ : ಈಗ ದೇವಸ್ಥಾನದಲ್ಲಿ ಪೂಜೆಯ ವೇಳೆ ಅಂತ ಗೊತ್ತಿಲ್ವ?
ಮಗು : ಮರ್ತು ಬಿಟ್ಟೆ, ಅಮ್ಮ.
ಗಂಗ : ಇನ್ನೊಮ್ಮೆ ಪೂಜೆಗೆ ಬರದೆ ಇದ್ದರೆ ನನಗೆ ಬಹಳ ಕೋಪ ಬರುತ್ತದೆ. ನೋಡು, ನಿನಗಿಂತ ಚಿಕ್ಕವಳು ಇರೋವಾಗೆ ನಾನು ನನ್ನ ತಂದೆಯ ಸ್ಥಾನ ತೊಗೊಳ್ಳಬೇಕಾಯಿತು.
ಮಗು : ಅದು ಯಾಕೆ?
ಗಂಗ : ಯಾಕೆ ಏನು? ಆ ದಿನ ನನ್ನ ಅಮ್ಮ ಕೂಡ ಮನೆಯಲ್ಲಿ ಇರಲಿಲ್ಲ. ಆ ರಾತ್ರಿ ನನ್ನ ಅಪ್ಪನನ್ನು ನೋಡಿದ್ದು ಅದೇ ಕೊನೆಯ ಬಾರಿ. ಎದ್ದ ಮೇಲೆ, ನಮ್ಮ ಗುಡಿಸಲು ಗಾಳಿಗೆ ಹಾರಿ ಹೋಗಿತ್ತು. ಕಣ್ಣು ತೆರೆದಾಗ, ನನ್ನ ಮುಂದೆ ನಿಂತಿದ್ದು ಯಾರು ಗೊತ್ತ?
ಮಗು : ಗೊತ್ತಿಲ್ಲ.
ಗಂಗ : ನಮ್ಮ ರಾಜ.
ಮಗು : ರಾಜ ಏನು ಹೇಳಿದ?
ಗಂಗ : ನಿನ್ನ ಅಪ್ಪ ತೀರಿ ಹೋದ, ಈಗ ನಿನ್ನ ಅಪ್ಪನ ಕೆಲಸ ನೀನು ಮಾಡಬೇಕು ಎಂದು ಹೇಳಿದ. ರಾಜನೆ ಕೊಳದ ಬದಿಯಲ್ಲಿ ಈ ದೇವಸ್ಥಾನ ಕಟ್ಟಿಸಿದ. ನಮ್ಮ ರಾಜನ ಅಪ್ಪಣೆಯಂತೆ, ಇಲ್ಲಿ ಪ್ರತಿ ಮಂಗಳವಾರ ಹಾಗು ಶುಕ್ರವಾರ ಪೂಜೆ ಆಗುತ್ತದೆ. ಜನ ದೂರ ದೂರದ ಊರುಗಳಿಂದ ಬರುತ್ತಾರೆ.
ಮಗು : ಅಮ್ಮ ಇದು ಯಾವ ಗುಡಿ?
ಗಂಗ : ಇದು ಸೃಷ್ಟಿ ದೇವಿಯ ಗುಡಿ. ಮಗು, ಆ ಎರಡು ಮೂರ್ತಿಗಳನ್ನು ನೋಡು. ಮೇಲಿನ ಮೂರುತಿಯೆ, ಸೃಷ್ಟಿ ದೇವತೆ.
ಮಗು : ಮತ್ತೆ ಕೆಳಗಿನದು ಯಾರು?
ಗಂಗ : ಕೆಳಗಿಂದು, ನಿನ್ನ ತಾತ, ನನ್ನ ಅಪ್ಪ - ಹುಚ್ಚ ಮಾರನದು.
ಮಗು : ಅಮ್ಮ, ದೇವಿಯ ಜೊತೆ ತಾತ ಮಾರನ್ನ ಯಾಕೆ ಕೂಡಿಸಿದ ನಮ್ಮ ರಾಜ?
ಗಂಗ : ಹೇಳ್ತೀನಿ ಬಾ ಇಲ್ಲಿ. ಒಂದು ದಿನ...
ದೃಶ್ಯ 2
|
 |
|
 |
|
|
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
 |
|
 |