ಇದು ಎರಡು ಹಳ್ಳಿಗಳ ನಡುವೆ ಸಿಗುವ ಕೆರೆಗಳ ಗೋಳಿನ ಕಥೆ ಮಾತ್ರವಲ್ಲ. ನಗರದಲ್ಲಿನ ಕೆರೆಗಳು ಖಾಸಗಿಯವರ ಕೈಗೆ ಸಿಕ್ಕು ಹಣ ಎಳೆಯುವ ಕೃತಕ ಕೆರೆಗಳಾಗಿ ಮಾರ್ಪಟ್ಟಿದ್ದರೆ, ಹಳ್ಳಿಗಳಲ್ಲಿ ಕೆರೆಗಳು ನಿರ್ಲಕ್ಷ್ಯದ ಪ್ರತೀಕವಾಗಿ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಹಳ್ಳಿಗಳಲ್ಲಿ ಗಾಳಿ ಬೀಸಿದಾಗ ಬರುತ್ತಿರುವುದು ತಾವರೆ ಹೂಗಳ ಸುಗಂಧ ಪರಿಮಳವಲ್ಲ, ಕೊಚ್ಚೆಯ ಗಬ್ಬುನಾತ!